ನೀ ಬಂದು ನಿಂತಾಗ ನಿಂತು ನೀ ನಕ್ಕಾಗ ಸೋತೆ ನಾನಾಗ. . . ಅಂದಿನ ಸುಪ್ರಸಿದ್ಧ ಗೀತೆಯ ಸಾಲನ್ನು ಮೊಟಕುಗೊಳಿಸಿ ನೀ ಬಂದು ನಿಂತಾಗ ಎಂಬ ಶೀರ್ಷಿಕೆಯಡಿ ಜೂಟ್ ಖ್ಯಾತಿಯ ಸೌರವ್ ಅಭಿನಯದ ಚಿತ್ರ ಪವನ್ ಕ್ರಿಯೇಷನ್ಸ್ ಲಾಂಛನದಲ್ಲಿ ತಯಾರಾಗಿ ಈ ವಾರ ಪ್ರೇಕ್ಷಕ ಮಹಾಪ್ರಭುವಿನ ಮುಂದೆ ಬಂದು ನಿಲ್ಲಲಿದೆ.
ಡಾ|| ವಿಷ್ಣುವರ್ಧನ್ ಅವರ ಮಾನಸ ಪುತ್ರ ಎಂದೇ ಖ್ಯಾತಿಯಾದ ಸುಂದರಾಂಗ ಸೌರವ್ ನೀ ಬಂದು ನಿಂತಾಗ ಚಿತ್ರದ ಅನೇಕ ವಿಚಾರಗಳ ಬಗ್ಗೆ ಪ್ರೇಕ್ಷಕರು ಒಪ್ಪಿಗೆ ಸೂಚಿಸಲಿದ್ದಾರೆ. ಈ ಚಇತ್ರದ ಕ್ಲೈಮಾಕ್ಸ್ ಇದುವರೆವಿಗೂ ಯಾವ ಭಾಷೆಯಲ್ಲೂ ಪ್ರಯತ್ನಿಸಿಲ್ಲ ಎಂದು ತಿಳಿದು ಬಂದಿದೆ.
ಪಾಪ್ ಹುಡುಗಾರ ಸೌರವ್ ಮಧ್ಯಂತರದ ಹೊತ್ತಿಗೆ ಪ್ರೀತಿಸಿದ ಮನದನ್ನೆ ತ್ಯಜಿಸಿದಾಗ ಚಿತ್ರ ಯಾವ ಹಾದಿಯನ್ನು ಹಿಡಿಯುತ್ತದೆ ಎಂಬುದಕ್ಕೆ ತೆರೆಯಮೇಲೆ ನೋಡಬೇಕು ಎನ್ನುತ್ತಾರೆ.
ಚೆನ್ನೈ ಮೂಲದ ಶೇಖರ್ ಸಿ. ಶರವಣನ್ ಕಥೆ ಬರೆದು ಈ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ.
ರಿಕ್ಷಿಕಾ ಶ್ರೀ ನಾಯಕಿಯಾಗಿರುವ ಈ ಚಿತ್ರಕ್ಕೆ ಸುಶ್ರಾವ್ಯ ಸಂಗೀತ ಇ.ಎಲ್. ಇಂದ್ರಜಿತ್ ಒದಗಿಸಿದ್ದಾರೆ. ಮಾಥ್ಯೂರಾಜನ್ ಛಾಯಾಗ್ರಹಣ ಈ ಚಿತ್ರಕ್ಕಿದೆ